ನೀರು… ನೀರು… ನೀರು…

ನೀರು… ನೀರು… ನೀರು…
ಬದುಕಿಗೆ ಅಲ್ಲವೆ ಅದು ಬೇರು
ಬೇರು ಇಲ್ಲದ ಮರವುಂಟೆ?
ಇದ್ದರೂ ಅದಕೆ ಉಸಿರುಂಟೆ?? /ಪ//

ಗೆದ್ದನು ಜಗವ ಅಲೆಗ್ಸಾಂಡರ
ಕಡೆಗೆ ಸತ್ತನು ಕಾಣದೆ ನೀರ
ಹೆಣ್ಣನು ಗೆದ್ದ ಭಾವ ಮದಲಿಂಗ
ಕೂಡ ಸೇರಿದ ಅದೇ ಜವನೂರ
ಏನೇ ಆದರೂ ಏನೇ ಹೋದರೂ
ಅಲ್ಲಿ ಪ್ರವಾಹ, ಇಲ್ಲಿ ಬರ
ಈ ನಿಜಕಿಂತಲೂ ಆಳದ ನಿಜವು
ನಮ್ಮ ವಿವೇಕಕೆ ಕೂಡ ಬರ!

ನೀರಿಗೆ ನಾವ್ ಬೆಲೆ ಕೊಡಲೇ ಇಲ್ಲ
ಅದಕೆ ಬಾಟಲಿ ಸೇರಿದೆ ನೀರು
ಆದರೂ ಶ್ರೀಮಂತ ಹುಂಬತನ
ಅದಕೆ ಪಶುಪಕ್ಷಿಗೆ ಕಣ್ಣೀರು
ಇದನು ಕಂಡಿದೆ ಬೆಟ್ಟ ಅರಣ್ಯ
ಕೊಡಲಿ ಪೆಟ್ಟನು ಬುಡದಲಿ ತಿಂದು
ಸತ್ತರೆ ಭೂಮಿ ಕಾಯ್ವುದೆ ಗಗನ
ಎಂದು ಕೇಳಿದೆ ನಿಸರ್ಗ ನೊಂದು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರೇ ಪಾರುಮಾಡಿದಿ ಕಂಡಿಯಾ
Next post ಒಂದು ಹಳೆಯ ಕತೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys